ಯಾಕೋ ಏನೋ ಗೊತ್ತಿಲ್ಲ... ಒಬ್ಬ ಫ್ರೆಂಡ್ ಜೊತೆಗೆ ಇದ್ದಿದ್ರೆ ಈ ಟೈಮ್ ಅಲ್ಲಿ ಚೆನ್ನಾಗಿರ್ತಿತ್ತು ಅನ್ನಿಸ್ತ ಇದೆ....
ಪೂರ್ತಿ ವೀಕೆಂಡ್ ಆರಾಮಾಗೆ ಟೈಮ್ ಪಾಸ್ ಆಯ್ತು... ಒಳ್ಳೆ ನಿದ್ದೇನು ಆಯ್ತು... ಫೆಸ್ ಬುಕ್ಕಲ್ಲಿ ಕುತ್ಕೊಂಡು ಸುಮಾರ್ ಪಟ್ಟಂಗ ಹೊಡೆದಿದ್ದು ಆಯ್ತು... ರಾತ್ರಿ ಒಂದು 5 ಫಿಲಂ ಕೂಡ ನೋಡಿದೀನಿ. ಎಲ್ಲ ಸರಿಯಾಗೆ ಇದೆ ಆದರು ಸಹ ಯಾರೋ ಜೊತೆಗಿಲ್ಲ ಅನ್ನೋ ಮನೋಭಾವ...
ಫ್ರೈಡೇ ನೈಟ್ ಶಿಫ್ಟ್ ಅಲ್ಲಿ ಇದ್ದಾಗ ಕಿರಣ ಕಾಲ್ ಮಾಡ್ದ. ಅವ್ನು ಹೊಸ ಕಾರ್ ಬೇರೆ ತಗೊಂಡಿದ್ದ. ಮಗ ಘಾಟಿ ಸುಬ್ರಮಣ್ಯ ದೇವಸ್ಥಾನಕ್ಕೆ ಹೋಗೋಣ ಅನ್ಕೊಂಡಿದಿವಿ. ಫ್ರೀ ಇದ್ರೆ ಬರ್ತೀಯ ಅಂದ... ಅವನಿಗೆ ಡ್ರೈವಿಂಗ್ ಅಷ್ಟಾಗಿ ಬರಲ್ಲ ಅಂತ ನಂಗ್ ಗೊತ್ತಿತ್ತು. ಅದಕ್ಕೆ ಆಯ್ತು ಬರ್ತೀನಿ ಅಂದೇ... ಬೆಳಗ್ಗೆ ಹೇಳದೆ ಕೇಳ್ದೆ 7 ಗಂಟೆಗೆ ಶಿಫ್ಟ್ ಮುಗಿಯದಾದ್ರು 5 ಗಂಟೆಗೇ ಹೊರಟ್ ಬಿಟ್ಟೆ ಮನೆಗೆ... ಕೆಲ್ಸನು ಇರ್ಲಿಲ್ಲ ಸುಮ್ನೆ ಹೋಗಿ ಮಲ್ಕೊಂಡೆ...8 ಗಂಟೆ ಹೊತ್ತಿಗೆ ಮೊಬೈಲ್ ಇಂದ ಕರೆದರೂ ಕೇಳದೆ ಅನ್ನೋ ರಿಂಗ್ ಹೊಡ್ಕೊಳಕ್ಕೆ ಶುರು ಆಯ್ತು ನೋಡಿದ್ರೆ ಕಿರಣನ್ ಕಾಲ್ ಅದು... ಹಾಗೆ ಪಿಕ್ ಮಾಡಿ ಹೊರಡ್ತಾ ಇದೀನಿ ಅಂತ ಅವನಿಗೆ ಒಂದ್ ಸಣ್ಣ ಸುಳ್ಳು ಹೇಳಿ... ಬೇಗ ಬೇಗ ಸ್ನಾನ, ಸಂಧ್ಯಾವಂದನೆ, ಪೂಜೆ ಎಲ್ಲ ಮುಗ್ಸಿಟ್ಟು.. ಹೊಟ್ಟೆಗೆ ಒಂದ್ ಸ್ವಲ್ಪ ನೈವೇದ್ಯ ಮಾಡ್ಕೊಂಡು ಹೊರ್ಟೆ. ಅವ್ನ ಮನೆಗ್ ಹೋಗೋ ಹೊತ್ತಿಗೆ ಎಲ್ಲರು ರೆಡಿ ಆಗಿ ನಂಗೆ ಕಾಯ್ತಾ ಇದ್ರು. ಸೀದಾ ಅವ್ನ ಕಾರ್ ಎತ್ಕೊಂಡು ಹೊರಟ್ವಿ... ಗೊತ್ತೇ ಇದ್ಯಲ್ಲ ನಮ್ಮ ಬೆಂಗಳೂರಿನ ಟ್ರಾಫಿಕ್. ನನ್ ಒಬ್ಬ ಮ್ಯಾನೇಜರ್ ಮೊದ್ಲು ಹೇಳ್ತಾ ಇದ್ದ "In Bangalore traffic is always bad.. It can only get worse " ಅಂತ. ಹಾಗೆ ಆಯ್ತು ನಮ್ ಕಥೆನು ಟ್ರಾಫಿಕ್ ಜಾಮ್!!!! ಯಾವ್ ರೋಡಿಗೆ ಹೋದರು ಟ್ರಾಫಿಕ್ ಜಾಮ್!!!!.
ಹಾಗು ಹೀಗೂ ತಳ್ಕೊಂಡ್ ತಳ್ಕೊಂಡ್ ವಿಜಯನಗರದಿಂದ ಹೆಬ್ಬಾಳದ ತನಕ ಬಂದ್ ಮುಟ್ಟಿದ್ವಿ ಅಲ್ಲಿಂದ ಮುಂದೆ ಅಂತು ಒಳ್ಳೆ ಹೈವೆ ರೋಡ್ ದೊಡ್ಡಬಳ್ಳಾಪುರ ಯಾವಾಗ್ ಬಂತು ಅಂತಾನೆ ಗೊತ್ತಾಗ್ಲಿಲ್ಲ. ದೊಡ್ಡಬಳ್ಳಾಪುರದಲ್ಲಿ ಒಂದ್ ಸಣ್ಣ ಬ್ರೇಕ್ ತಗೊಂಡು ಮುಂದೆ ಹೊರಟ್ವಿ. ಘಾಟಿ ಸುಬ್ರಮಣ್ಯದಲ್ಲಿ ದೇವರ ಅಭಿಷೇಕ, ಪೂಜೆ, ದರ್ಶನ ಎಲ್ಲ ಮುಗ್ಸಿ ಹೊರಟ್ವಿ.. ಚಿಕ್ಕಬಳ್ಳಾಪುರಕ್ಕೆ ಬಂದು ಅಲ್ಲಿ ಕಿರಣನ ರಿಲೇಟಿವ್ ಒಬ್ರ ಮನೆಗ್ ಹೋಗಿ ಒಂದು ಕಾಫೀ ಕುಡಿದು ಬೆಂಗಳೂರಿಗೆ ವಾಪಸ್ ಹೊರಟ್ವಿ. International airport ಇಂದ ಸ್ವಲ್ಪ ಮುಂದೆ ಬರ್ತಾ ಇದ್ದಹಾಗೆ ಎಲ್ಲಿದ್ರೋ ಗೊತ್ತಿಲ್ಲ interceptor ಅಲ್ಲಿ ನಮ್ ಕಾರ್ ಸ್ಪೀಡ್ 97 kmph ಇತ್ತು ಅನ್ಸತ್ತೆ. ನಮ್ಮನ್ನ ಹಿಡ್ಕೊಂಡ್ಬಿಟ್ರು. ಅಲ್ಲಿ ಲಿಮಿಟ್ ಇದ್ದಿದ್ದೆ 60 kmph ಅಂತೆ... ಯಾವ್ ಯಾವ್ದೋ 3 ಕೇಸ್ ಹಾಕಿ ಒಟ್ಟು 700 rs ಫೈನ್ ಬೇರೆ ತಗೊಂಡ್ರು. ಮಾಡಿದ್ದುಣ್ಣೋ ಮಾರಾಯ ಅನ್ನೋ ಹಾಗೆ 700 rs ಫೈನ್ ಕಟ್ಟಿ ಅಲ್ಲಿಂದ ಹೊರಟ್ವಿ. ಹಾಗು ಹೀಗೂ ಬೆಂಗಳೂರಿಗೆ ಬಂದು ತಲಪಿ ಅವ್ರ ಮನೆ ಇಂದ ನಂ ಕಾರ್ ತಗೊಂಡು ವಾಪಸ್ ಮನೆಗ್ ಬಂದೆ.
ನೈಟ್ ಶಿಫ್ಟ್ ಬೇರೆ ಮಾಡಿದ್ದು ನಿದ್ದೆ ಇಲ್ದೆ ಲಾಂಗ್ ಡ್ರೈವ್ ಮಾಡಿದ್ದೂ ಎಲ್ಲ ಸೇರಿ ಹುಷಾರ್ ಇಲ್ದೆ ಹೋದಹಾಗ್ ಆಗಿತ್ತು ನಂಗೆ. ಮನೆಗ್ ಹೋದವನೆ ಹಿಂದೆ ಮುಂದೆ ಯೋಚನೆ ಮಾಡದೆ ಒಂದ್ ಚೂರು ಮೊಸರನ್ನ ತಿಂದಿದ್ದೆ ನನ್ ರೂಮಿಗ್ ಹೋಗಿ ಬಿದ್ಕೊಂಡೆ. 8 ಗಂಟೆಗೆಲ್ಲ ನಂಗೆ ಮಧ್ಯ ರಾತ್ರಿ ಆಗಿತ್ತು. ಬೆಳಗ್ಗೆ 8 ಗಂಟೆ ತನಕ ಯಾರು ಬಂದು ನನ್ನ ಡಿಸ್ಟರ್ಬ್ ಮಾಡ್ಲಿಲ್ಲ. ಒಳ್ಳೆ ನಿದ್ದೆ ಆಗಿತ್ತು. ಬೆಳಗ್ಗೆನೇ ಮಳೆ ಬೇರೆ ಹಿಡ್ಕೊಂದಿತ್ತು. ಭಾನುವಾರ ನನ್ ಫ್ರೆಂಡ್ಸ್ ಸಿಗ್ತಾರೆ ಒಂದ್ ಸ್ವಲ್ಪ ಟೈಮ್ ಪಾಸು ಆಗತ್ತೆ ಅಂತ ಎಲ್ಲ ಮನಸಲ್ಲಿ ಅಂದ್ಕೊಂಡು ಇದ್ದೆ. ಬರಿ ಅಂದ್ಕೊಂದಿದ್ದಷ್ಟೇ ಆಯ್ತು ಒಬ್ರು ಸಿಗ್ಲಿಲ್ಲ. ಒಂದಿಷ್ಟು ಮೂವಿಗಳನ್ನ ಡೌನ್ಲೋಡ್ ಮಾಡಿದ್ದೆ. ಅವನ್ನೆಲ್ಲ ನೋಡ್ಕೊಂಡು ಟೈಮ್ ಪಾಸು ಮಾಡಿದ್ದೆ ಬಂತು. ಜೊತೆಗೆ ಫೇಸ್ ಬುಕ್ಕಲ್ಲಿ ಯಾರಾದ್ರೂ ಇರ್ತಾರೆ ಅಂದ್ಕೊಂಡೆ.. ನೋಡಿರೆ ಕರೆಂಟ್ ಕೂಡ ಹೊರಟ್ ಹೋಯ್ತು ಅಷ್ಟರಲ್ಲಿ. ಪಾಪಿ ಸಾಯಕ್ಕೆ ಹೋದರು ಮೊಣಕಾಲುದ್ದ ನೀನು ಅಂದ ಹಾಗೆ ಆಗಿತ್ತು ನನ್ ಸ್ಥಿತಿ. ಮಧ್ಯಾನ ಊಟ ಮುಗ್ಸಿ ಮತ್ತೆ ನಿದ್ದೆ. ಸಂಜೆ ಸುಮಾರು 7 ಗಂಟೆ ಹೊತ್ತಿಗೆ ಅಮ್ಮ ಬಂದು ಎಬ್ಸಿದ್ರು ಏಳಕ್ಕೆ ಮನಸ್ಸಿಲ್ಲ. ಏಳಬೇಕಲ್ಲ ಅಂತ ಎದ್ದು ಒಂದ್ ಕಪ್ ಚಾ ಕುಡಿದು ಮತ್ತೆ ಕಂಪ್ಯೂಟರ್ ಹಿಡಿದು ಕೂತೆ. ಆಗ ಮನಸ್ಸಿಗೆ ಬಂದಿದ್ದು ಈ ಯೋಚನೆ "ಒಬ್ಬ ಫ್ರೆಂಡ್ ಜೊತೆಗೆ ಇದ್ದಿದ್ರೆ ಈ ಟೈಮ್ ಅಲ್ಲಿ ಚೆನ್ನಾಗಿರ್ತಿತ್ತು" ಅಂತ. ನನ್ ಜನ್ಮಕ್ಕೆ ಒಬ್ಬ ನೆಟ್ಟಗಿರೋ ಫ್ರೆಂಡ್ ಕೂಡ ಸಿಗ್ಲಿಲ್ಲ ನಂಗೆ. ಎಲ್ಲ ಒಂದಲ್ಲ ಒಂದ್ ರೀತಿ ಹುಚ್ಚರೆ.
ಅದೇ ಟೈಮ್ಅಲ್ಲಿ ಒಂದು ಒಳ್ಳೆ ಯೋಚನೆ ಕೂಡ ನಂಗ್ ಬಂತು. ಯಾಕೆ ನಾನು ಕನ್ನಡದಲ್ಲಿ ಬ್ಲಾಗ್ ಬರೀಬಾರದು ಅಂತ. ಈ ಯೋಚನೆಯ ಫಲವೇ ನನ್ನ ವಿನೂತನ. ಒಂದು ರೀತಿಲಿ ಹೇಳಬೇಕಂದ್ರೆ ಟೈಮ್ ಪಾಸು ಮಾಡೋಕೆ ಗೊತ್ತಾಗದೆ ಶುರುವಾದಂಥ ಒಂದು ಬ್ಲಾಗ್. ನನ್ನ ಮನಸ್ಸಿಗೆ ತೋಚಿದ್ದನ್ನ ಗೀಚ್ತೀನಿ ಇಲ್ಲಿ. ಓದೋದಕ್ಕಿಂತ ಒಳ್ಳೆ ಸ್ನೇಹಿತ ಯಾರು ಇಲ್ಲ ಅಂತ ಕೇಳಿದ್ದೆ. ಆದ್ರೆ ನಾನು ಬರೆಯೋದ್ರಲ್ಲೇ ನನ್ನ ಸ್ನೇಹಿತನ ಕಂಡು ಕೊಲ್ಲ್ತ ಇದೀನಿ. ಯಾರಿಗೂ ನೋವು ಅಥವಾ ಕಷ್ಟ ಕೊಡಕ್ಕೆ ಇಲ್ಲಿ ಏನನ್ನು ಬರಿಯಲ್ಲ. ನನ್ನ ಸುಖ ನನ್ನ ದುಖ ಎರಡನ್ನು ತೋಡ್ಕೊತೀನಿ. ಓದಿ.... ಹರಿಸಿ... ಬೆಳೆಸಿ. ನಿಮ್ಮೆಲರ ಆಶೀರ್ವಾದ ನನಗಿರಲಿ.
ಇಂತಿ,
ವಿನೂತನದ ವಿನಯ
ಪೂರ್ತಿ ವೀಕೆಂಡ್ ಆರಾಮಾಗೆ ಟೈಮ್ ಪಾಸ್ ಆಯ್ತು... ಒಳ್ಳೆ ನಿದ್ದೇನು ಆಯ್ತು... ಫೆಸ್ ಬುಕ್ಕಲ್ಲಿ ಕುತ್ಕೊಂಡು ಸುಮಾರ್ ಪಟ್ಟಂಗ ಹೊಡೆದಿದ್ದು ಆಯ್ತು... ರಾತ್ರಿ ಒಂದು 5 ಫಿಲಂ ಕೂಡ ನೋಡಿದೀನಿ. ಎಲ್ಲ ಸರಿಯಾಗೆ ಇದೆ ಆದರು ಸಹ ಯಾರೋ ಜೊತೆಗಿಲ್ಲ ಅನ್ನೋ ಮನೋಭಾವ...
ಫ್ರೈಡೇ ನೈಟ್ ಶಿಫ್ಟ್ ಅಲ್ಲಿ ಇದ್ದಾಗ ಕಿರಣ ಕಾಲ್ ಮಾಡ್ದ. ಅವ್ನು ಹೊಸ ಕಾರ್ ಬೇರೆ ತಗೊಂಡಿದ್ದ. ಮಗ ಘಾಟಿ ಸುಬ್ರಮಣ್ಯ ದೇವಸ್ಥಾನಕ್ಕೆ ಹೋಗೋಣ ಅನ್ಕೊಂಡಿದಿವಿ. ಫ್ರೀ ಇದ್ರೆ ಬರ್ತೀಯ ಅಂದ... ಅವನಿಗೆ ಡ್ರೈವಿಂಗ್ ಅಷ್ಟಾಗಿ ಬರಲ್ಲ ಅಂತ ನಂಗ್ ಗೊತ್ತಿತ್ತು. ಅದಕ್ಕೆ ಆಯ್ತು ಬರ್ತೀನಿ ಅಂದೇ... ಬೆಳಗ್ಗೆ ಹೇಳದೆ ಕೇಳ್ದೆ 7 ಗಂಟೆಗೆ ಶಿಫ್ಟ್ ಮುಗಿಯದಾದ್ರು 5 ಗಂಟೆಗೇ ಹೊರಟ್ ಬಿಟ್ಟೆ ಮನೆಗೆ... ಕೆಲ್ಸನು ಇರ್ಲಿಲ್ಲ ಸುಮ್ನೆ ಹೋಗಿ ಮಲ್ಕೊಂಡೆ...8 ಗಂಟೆ ಹೊತ್ತಿಗೆ ಮೊಬೈಲ್ ಇಂದ ಕರೆದರೂ ಕೇಳದೆ ಅನ್ನೋ ರಿಂಗ್ ಹೊಡ್ಕೊಳಕ್ಕೆ ಶುರು ಆಯ್ತು ನೋಡಿದ್ರೆ ಕಿರಣನ್ ಕಾಲ್ ಅದು... ಹಾಗೆ ಪಿಕ್ ಮಾಡಿ ಹೊರಡ್ತಾ ಇದೀನಿ ಅಂತ ಅವನಿಗೆ ಒಂದ್ ಸಣ್ಣ ಸುಳ್ಳು ಹೇಳಿ... ಬೇಗ ಬೇಗ ಸ್ನಾನ, ಸಂಧ್ಯಾವಂದನೆ, ಪೂಜೆ ಎಲ್ಲ ಮುಗ್ಸಿಟ್ಟು.. ಹೊಟ್ಟೆಗೆ ಒಂದ್ ಸ್ವಲ್ಪ ನೈವೇದ್ಯ ಮಾಡ್ಕೊಂಡು ಹೊರ್ಟೆ. ಅವ್ನ ಮನೆಗ್ ಹೋಗೋ ಹೊತ್ತಿಗೆ ಎಲ್ಲರು ರೆಡಿ ಆಗಿ ನಂಗೆ ಕಾಯ್ತಾ ಇದ್ರು. ಸೀದಾ ಅವ್ನ ಕಾರ್ ಎತ್ಕೊಂಡು ಹೊರಟ್ವಿ... ಗೊತ್ತೇ ಇದ್ಯಲ್ಲ ನಮ್ಮ ಬೆಂಗಳೂರಿನ ಟ್ರಾಫಿಕ್. ನನ್ ಒಬ್ಬ ಮ್ಯಾನೇಜರ್ ಮೊದ್ಲು ಹೇಳ್ತಾ ಇದ್ದ "In Bangalore traffic is always bad.. It can only get worse " ಅಂತ. ಹಾಗೆ ಆಯ್ತು ನಮ್ ಕಥೆನು ಟ್ರಾಫಿಕ್ ಜಾಮ್!!!! ಯಾವ್ ರೋಡಿಗೆ ಹೋದರು ಟ್ರಾಫಿಕ್ ಜಾಮ್!!!!.
ಹಾಗು ಹೀಗೂ ತಳ್ಕೊಂಡ್ ತಳ್ಕೊಂಡ್ ವಿಜಯನಗರದಿಂದ ಹೆಬ್ಬಾಳದ ತನಕ ಬಂದ್ ಮುಟ್ಟಿದ್ವಿ ಅಲ್ಲಿಂದ ಮುಂದೆ ಅಂತು ಒಳ್ಳೆ ಹೈವೆ ರೋಡ್ ದೊಡ್ಡಬಳ್ಳಾಪುರ ಯಾವಾಗ್ ಬಂತು ಅಂತಾನೆ ಗೊತ್ತಾಗ್ಲಿಲ್ಲ. ದೊಡ್ಡಬಳ್ಳಾಪುರದಲ್ಲಿ ಒಂದ್ ಸಣ್ಣ ಬ್ರೇಕ್ ತಗೊಂಡು ಮುಂದೆ ಹೊರಟ್ವಿ. ಘಾಟಿ ಸುಬ್ರಮಣ್ಯದಲ್ಲಿ ದೇವರ ಅಭಿಷೇಕ, ಪೂಜೆ, ದರ್ಶನ ಎಲ್ಲ ಮುಗ್ಸಿ ಹೊರಟ್ವಿ.. ಚಿಕ್ಕಬಳ್ಳಾಪುರಕ್ಕೆ ಬಂದು ಅಲ್ಲಿ ಕಿರಣನ ರಿಲೇಟಿವ್ ಒಬ್ರ ಮನೆಗ್ ಹೋಗಿ ಒಂದು ಕಾಫೀ ಕುಡಿದು ಬೆಂಗಳೂರಿಗೆ ವಾಪಸ್ ಹೊರಟ್ವಿ. International airport ಇಂದ ಸ್ವಲ್ಪ ಮುಂದೆ ಬರ್ತಾ ಇದ್ದಹಾಗೆ ಎಲ್ಲಿದ್ರೋ ಗೊತ್ತಿಲ್ಲ interceptor ಅಲ್ಲಿ ನಮ್ ಕಾರ್ ಸ್ಪೀಡ್ 97 kmph ಇತ್ತು ಅನ್ಸತ್ತೆ. ನಮ್ಮನ್ನ ಹಿಡ್ಕೊಂಡ್ಬಿಟ್ರು. ಅಲ್ಲಿ ಲಿಮಿಟ್ ಇದ್ದಿದ್ದೆ 60 kmph ಅಂತೆ... ಯಾವ್ ಯಾವ್ದೋ 3 ಕೇಸ್ ಹಾಕಿ ಒಟ್ಟು 700 rs ಫೈನ್ ಬೇರೆ ತಗೊಂಡ್ರು. ಮಾಡಿದ್ದುಣ್ಣೋ ಮಾರಾಯ ಅನ್ನೋ ಹಾಗೆ 700 rs ಫೈನ್ ಕಟ್ಟಿ ಅಲ್ಲಿಂದ ಹೊರಟ್ವಿ. ಹಾಗು ಹೀಗೂ ಬೆಂಗಳೂರಿಗೆ ಬಂದು ತಲಪಿ ಅವ್ರ ಮನೆ ಇಂದ ನಂ ಕಾರ್ ತಗೊಂಡು ವಾಪಸ್ ಮನೆಗ್ ಬಂದೆ.
ನೈಟ್ ಶಿಫ್ಟ್ ಬೇರೆ ಮಾಡಿದ್ದು ನಿದ್ದೆ ಇಲ್ದೆ ಲಾಂಗ್ ಡ್ರೈವ್ ಮಾಡಿದ್ದೂ ಎಲ್ಲ ಸೇರಿ ಹುಷಾರ್ ಇಲ್ದೆ ಹೋದಹಾಗ್ ಆಗಿತ್ತು ನಂಗೆ. ಮನೆಗ್ ಹೋದವನೆ ಹಿಂದೆ ಮುಂದೆ ಯೋಚನೆ ಮಾಡದೆ ಒಂದ್ ಚೂರು ಮೊಸರನ್ನ ತಿಂದಿದ್ದೆ ನನ್ ರೂಮಿಗ್ ಹೋಗಿ ಬಿದ್ಕೊಂಡೆ. 8 ಗಂಟೆಗೆಲ್ಲ ನಂಗೆ ಮಧ್ಯ ರಾತ್ರಿ ಆಗಿತ್ತು. ಬೆಳಗ್ಗೆ 8 ಗಂಟೆ ತನಕ ಯಾರು ಬಂದು ನನ್ನ ಡಿಸ್ಟರ್ಬ್ ಮಾಡ್ಲಿಲ್ಲ. ಒಳ್ಳೆ ನಿದ್ದೆ ಆಗಿತ್ತು. ಬೆಳಗ್ಗೆನೇ ಮಳೆ ಬೇರೆ ಹಿಡ್ಕೊಂದಿತ್ತು. ಭಾನುವಾರ ನನ್ ಫ್ರೆಂಡ್ಸ್ ಸಿಗ್ತಾರೆ ಒಂದ್ ಸ್ವಲ್ಪ ಟೈಮ್ ಪಾಸು ಆಗತ್ತೆ ಅಂತ ಎಲ್ಲ ಮನಸಲ್ಲಿ ಅಂದ್ಕೊಂಡು ಇದ್ದೆ. ಬರಿ ಅಂದ್ಕೊಂದಿದ್ದಷ್ಟೇ ಆಯ್ತು ಒಬ್ರು ಸಿಗ್ಲಿಲ್ಲ. ಒಂದಿಷ್ಟು ಮೂವಿಗಳನ್ನ ಡೌನ್ಲೋಡ್ ಮಾಡಿದ್ದೆ. ಅವನ್ನೆಲ್ಲ ನೋಡ್ಕೊಂಡು ಟೈಮ್ ಪಾಸು ಮಾಡಿದ್ದೆ ಬಂತು. ಜೊತೆಗೆ ಫೇಸ್ ಬುಕ್ಕಲ್ಲಿ ಯಾರಾದ್ರೂ ಇರ್ತಾರೆ ಅಂದ್ಕೊಂಡೆ.. ನೋಡಿರೆ ಕರೆಂಟ್ ಕೂಡ ಹೊರಟ್ ಹೋಯ್ತು ಅಷ್ಟರಲ್ಲಿ. ಪಾಪಿ ಸಾಯಕ್ಕೆ ಹೋದರು ಮೊಣಕಾಲುದ್ದ ನೀನು ಅಂದ ಹಾಗೆ ಆಗಿತ್ತು ನನ್ ಸ್ಥಿತಿ. ಮಧ್ಯಾನ ಊಟ ಮುಗ್ಸಿ ಮತ್ತೆ ನಿದ್ದೆ. ಸಂಜೆ ಸುಮಾರು 7 ಗಂಟೆ ಹೊತ್ತಿಗೆ ಅಮ್ಮ ಬಂದು ಎಬ್ಸಿದ್ರು ಏಳಕ್ಕೆ ಮನಸ್ಸಿಲ್ಲ. ಏಳಬೇಕಲ್ಲ ಅಂತ ಎದ್ದು ಒಂದ್ ಕಪ್ ಚಾ ಕುಡಿದು ಮತ್ತೆ ಕಂಪ್ಯೂಟರ್ ಹಿಡಿದು ಕೂತೆ. ಆಗ ಮನಸ್ಸಿಗೆ ಬಂದಿದ್ದು ಈ ಯೋಚನೆ "ಒಬ್ಬ ಫ್ರೆಂಡ್ ಜೊತೆಗೆ ಇದ್ದಿದ್ರೆ ಈ ಟೈಮ್ ಅಲ್ಲಿ ಚೆನ್ನಾಗಿರ್ತಿತ್ತು" ಅಂತ. ನನ್ ಜನ್ಮಕ್ಕೆ ಒಬ್ಬ ನೆಟ್ಟಗಿರೋ ಫ್ರೆಂಡ್ ಕೂಡ ಸಿಗ್ಲಿಲ್ಲ ನಂಗೆ. ಎಲ್ಲ ಒಂದಲ್ಲ ಒಂದ್ ರೀತಿ ಹುಚ್ಚರೆ.
ಅದೇ ಟೈಮ್ಅಲ್ಲಿ ಒಂದು ಒಳ್ಳೆ ಯೋಚನೆ ಕೂಡ ನಂಗ್ ಬಂತು. ಯಾಕೆ ನಾನು ಕನ್ನಡದಲ್ಲಿ ಬ್ಲಾಗ್ ಬರೀಬಾರದು ಅಂತ. ಈ ಯೋಚನೆಯ ಫಲವೇ ನನ್ನ ವಿನೂತನ. ಒಂದು ರೀತಿಲಿ ಹೇಳಬೇಕಂದ್ರೆ ಟೈಮ್ ಪಾಸು ಮಾಡೋಕೆ ಗೊತ್ತಾಗದೆ ಶುರುವಾದಂಥ ಒಂದು ಬ್ಲಾಗ್. ನನ್ನ ಮನಸ್ಸಿಗೆ ತೋಚಿದ್ದನ್ನ ಗೀಚ್ತೀನಿ ಇಲ್ಲಿ. ಓದೋದಕ್ಕಿಂತ ಒಳ್ಳೆ ಸ್ನೇಹಿತ ಯಾರು ಇಲ್ಲ ಅಂತ ಕೇಳಿದ್ದೆ. ಆದ್ರೆ ನಾನು ಬರೆಯೋದ್ರಲ್ಲೇ ನನ್ನ ಸ್ನೇಹಿತನ ಕಂಡು ಕೊಲ್ಲ್ತ ಇದೀನಿ. ಯಾರಿಗೂ ನೋವು ಅಥವಾ ಕಷ್ಟ ಕೊಡಕ್ಕೆ ಇಲ್ಲಿ ಏನನ್ನು ಬರಿಯಲ್ಲ. ನನ್ನ ಸುಖ ನನ್ನ ದುಖ ಎರಡನ್ನು ತೋಡ್ಕೊತೀನಿ. ಓದಿ.... ಹರಿಸಿ... ಬೆಳೆಸಿ. ನಿಮ್ಮೆಲರ ಆಶೀರ್ವಾದ ನನಗಿರಲಿ.
ಇಂತಿ,
ವಿನೂತನದ ವಿನಯ
ಚಂದದ ಸಾಲುಗಳು.. ಇನ್ನಷ್ಟು ವಿನೂತನ ಬರವಣಿಗೆಗಳ ನಿರೀಕ್ಷೆಯಲ್ಲಿ..
ReplyDelete